ಮುಂಡಾಜೆ: ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ

ಮುಂಡಾಜೆ: ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ

ನೇಸರ ಆ.09: ಮುಂಡಾಜೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಾಪು ಕಿಂಡಿ ಅಣೆಕಟ್ಟು ಪ್ರದೇಶದ ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ ಎಸೆದಿರುವ ಘಟನೆ ನಡೆದಿದೆ.
ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನಾಲ್ಕಾರು ಗೋಣಿ ಚೀಲಗಳಲ್ಲಿ ಕೋಳಿ ತ್ಯಾಜ್ಯ ಕಂಡು ಬಂದಿದ್ದು ಇನ್ನಷ್ಟು ತ್ಯಾಜ್ಯವನ್ನು ನದಿಗೆ ಎಸೆದಿರುವ ಸಂಶಯ ವ್ಯಕ್ತವಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಈ ಪ್ರದೇಶದಲ್ಲಿ ಜನಸಂಚಾರ ಇರುವುದಿಲ್ಲ .ಈ ಕಾರಣದಿಂದ ತ್ಯಾಜ್ಯ ಎಸೆದಿರುವ ಘಟನೆ ಸೋಮವಾರ ಸ್ಥಳೀಯರ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಂಡಾಜೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ.

Leave a Reply

You May Have Missed

error: Content is protected !!