ಉಪ್ಪಿನಂಗಡಿಜೇಸಿಐ ವತಿಯಿಂದ ಯುವ ದಿನಾಚರಣೆ ಮತ್ತು “ಆದರ್ಶ ಯುವ ನಾಯಕ ಪ್ರಶಸ್ತಿ ಪ್ರದಾನ”

ಉಪ್ಪಿನಂಗಡಿಜೇಸಿಐ ವತಿಯಿಂದ ಯುವ ದಿನಾಚರಣೆ ಮತ್ತು “ಆದರ್ಶ ಯುವ ನಾಯಕ ಪ್ರಶಸ್ತಿ ಪ್ರದಾನ”

ಉಪ್ಪಿನಂಗಡಿ: ಇಲ್ಲಿನ ಜೇಸಿಐ ಘಟಕ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಕಾಂಚನ, ಅನಿಕೇತನ ಎಜ್ಯುಕೇಶನ್ ಟ್ರಸ್ಟ್ ಪುತ್ತೂರು, ವಿಕ್ರಂ ಯುವಕ ಮಂಡಲ ಕಾಂಚನ,ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು.

ಅನಿಕೇತನ ಟ್ರಸ್ಟ್ (ರಿ) ಪುತ್ತೂರು ಇದರ ಮೆಸೇಜಿಂಗ್ ಡೈರೆಕ್ಟರ್ ಕೃಷ್ಣ ಪ್ರಸಾದ್‌ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ, ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಉಡುಪ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಲಕ್ಷ್ಮಣ ಗೌಡ ವಿಕ್ರಂ ಯುವಕ ಮಂಡಲದ ಅಧ್ಯಕ್ಷರಾದ ಜೇಸಿ ಅನಿಲ್ ಪಿಂಟೊ, ಉಪಾಧ್ಯಕ್ಷ ಜೇಸಿ ಸಚಿನ್ ಮುದ್ಯ, ಜೇಸಿಐ ಕೋಶಾಧಿಕಾರಿ ಮಹೇಶ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೇಸಿಐ ವತಿಯಿಂದ ಕೊಡಮಾಡುವ “ಆದರ್ಶ ಯುವ ನಾಯಕ ಪ್ರಶಸ್ತಿ” ಯನ್ನು ಪ್ರಸನ್ನ ಕುಮಾರ್ ಪೆರಿಯಡ್ಕ ಅವರಿಗೆ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಗೆ “ವ್ಯಕ್ತಿತ್ವ ನಿರ್ಮಾಣಕ್ಕಾಗಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳು” ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಮತ್ತು “ಯುವಶಕ್ತಿಗೆ ಸ್ಪೂರ್ತಿ ಸ್ವಾಮಿ ವಿವೇಕಾನಂದರು” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಮತ್ತು 150 ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕವನ್ನು ಅನಿಕೇತನ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಯಿತು.“ಸ್ವಾಮಿ ವಿವೇಕಾನಂದರು ವಿದ್ಯಾರ್ಥಿಗಳಿಗೆ ಸ್ಫೂರ್ತಿ” ಎಂಬ ವಿಚಾರದ ಮೇಲೆ ತರಭೇತಿಯನ್ನು ಕೃಷ್ಣ ಪ್ರಸಾದರವರು ನೀಡಿದರು. ಜೇಸಿಐ ಅಧ್ಯಕ್ಷ ಶೇಖರ್ ಗೌಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಮಹೇಶ ರವರು ವಂದಿಸಿದರು.

Leave a Reply

You May Have Missed

error: Content is protected !!