ಪ್ರಿಯಕರನಿಂದ ಕಿರುಕುಳ – ವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ

ಪ್ರಿಯಕರನಿಂದ ಕಿರುಕುಳ – ವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ

ವಿವಾಹಿತೆ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ರಾಜ್‌ಕುಮಾರ್ ನಗರದಲ್ಲಿ ನಡೆದಿದೆ.

ರಾಜ್‌ಕುಮಾರ್‌ ನಗರದ ನಿವಾಸಿ ಇರ್ಫಾನ್ ಎಂಬಾತನ ಪತ್ನಿ ಶಬಾನಂ ಸುನಾಂ (32) ಮೃತ ಮಹಿಳೆ.

ಶಬಾನಂ ಸುನಾಂ ಕಳೆದ 15 ದಿನಗಳ ಹಿಂದೆ ಪತಿಯನ್ನು ತೊರೆದು ಇಸ್ಮಾಯಿಲ್ ಎಂಬಾತನೊಂದಿಗೆ ತೆರಳಿ ಪ್ರತ್ಯೇಕ ವಾಸವಿದ್ದಳು. ಆದ್ರೆ ಪತ್ನಿ ಕಾಣೆಯಾಗಿರುವುದಾಗಿ ಪತಿ ಇರ್ಫಾನ್ ನಗರದ ಪೆನ‌್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಯನ್ನ ಪತ್ತೆ ಮಾಡಿ ಕರೆಸಿ ಸಂಧಾನ ನಡೆಸಿ ಪುನಃ ಪತಿಯೊಂದಿಗೆ ಕಳುಹಿಸಿದ್ದರು. ಪತಿ ನಮಾಜ್‌ಗೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ನಡುವೆ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದರೂ ಪೊಲೀಸರು ಅರೋಪಿ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆತ ಆಗಾಗ್ಗೆ ಶಬಾನಂ ಸುನಾಂಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ, ಇದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಗಲಾದರೂ ಕ್ರಮ ವಹಿಸಿ ಆರೋಪಿಯನ್ನು ಬಂಧಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Leave a Reply

You May Have Missed

error: Content is protected !!