ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ನಡೆಯಲಿರುವ 52 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾಘ ಕೃಷ್ಣ ತ್ರಯೋದಶಿ ಕುಂಭ ಮಾಸ ದಿನ 24 ಸಲುವ ತಾರೀಕು 8-03-2024 ನೇ ಶುಕ್ರವಾರದಂದು 52 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವನ್ನು ಶ್ರದ್ಧಾಪೂರ್ವಕವಾಗಿ ಅರ್ಚಕರಾದ ಶ್ರೀಧರ ನೂಜಿನ್ನಾಯ ಇವರ ನೇತೃತ್ವದಲ್ಲಿ ಆಚರಿಸಲಾಗುವುದು . ಆ ಪ್ರಯುಕ್ತ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ಈ ಉತ್ಸವವು ಯಶಸ್ವಿಯಾಗಲು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಧಾರ್ಮಿಕ ಕಾರ್ಯಕ್ರಮಗಳು | |
ದಿನಾಂಕ 8 -03 -2024 ನೇ ಶುಕ್ರವಾರ | |
ಬೆಳಿಗ್ಗೆ ಗಂಟೆ7 -00 ರಿಂದ8 -30 ರವರೆಗೆ | ಪುಣ್ಯಾಹವಾಚನ ಉಷಾಪೂಜೆ |
ಬೆಳಿಗ್ಗೆ ಗಂಟೆ8 -30 ರಿಂದಸಂಜೆ ಗಂಟೆ 5 -00 ರತನಕ | ಭಾಗವತ ಪಾರಾಯಣ |
ಬೆಳಿಗ್ಗೆ ಗಂಟೆ9 -30 ರಿಂದ10 -30 ರ ತನಕ | ಗಣಹೋಮ ,ನವಕ ಕಲಶ |
ಮಧ್ಯಾಹ್ನಗಂಟೆ12 -30 ಕ್ಕೆ | ಮಹಾಪೂಜೆ ಪ್ರಸಾದ ವಿತರಣೆ |
ಸಂಜೆ ಗಂಟೆ6 -00 ರಿಂದ | ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ ದೀಪಾಲಂಕಾರ ಭೂಷಿತ ಮೆರವಣಿಗೆ ದೀಪಾರಾಧನೆ ಮತ್ತು ಸಂಧ್ಯಾಪೂಜೆ |
ಸಂಜೆ ಗಂಟೆ 7.00 ರಿಂದರಾತ್ರಿ 12 .00 ರ ತನಕ | ಊರ ಹೆಮ್ಮೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ |
ರಾತ್ರಿ ಗಂಟೆ 8 -30 ರಿಂದ | ಮಹಾಅನ್ನಸಂತರ್ಪಣೆ |
ರಾತ್ರಿ ಗಂಟೆ 9 :30 ನಂತರ | ಶಿವಾಭಿಷೇಕ |
ರಾತ್ರಿ ಗಂಟೆ 12 :00 ರಿಂದ1 -00 ರ ತನಕ | ಮಹಾಶಿವರಾತ್ರಿ ಪೂಜೆ ಪ್ರಸಾದ ವಿತರಣೆ |
ಸಾಂಸ್ಕೃತಿಕ ಕಾರ್ಯಕ್ರಮ | |
ರಾತ್ರಿ ಗಂಟೆ 01 .00 ರಿಂದ | ಶ್ರೀ ವಿಷ್ಣು ಕಲಾತಂಡ ತುಳುಅಪ್ಪೆ ಕಲಾವಿದೆರ್ ಪೆರ್ನೆ ಇವರಿಂದ ತುಳು ಹಾಸ್ಯಮಯ ನಾಟಕ“ಕುಡ ಒಂಜಾಕ ” |




















Leave a Reply