ಶಿಬಾಜೆಯಲ್ಲಿ ಕಸ್ತೂರಿ ರಂಗನ್ ವತಿಯಿಂದ ಪ್ರತಿಭಟನೆ

ಶಿಬಾಜೆಯಲ್ಲಿ ಕಸ್ತೂರಿ ರಂಗನ್ ವತಿಯಿಂದ ಪ್ರತಿಭಟನೆ

ಶಿಬಾಜೆ ಗ್ರಾ,ಪಂ ವಠಾರದಲ್ಲಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವತಿಯಿಂದ ಪ್ರತಿಭಟನೆ ನಡೆಯಿತು.

ನಂತರ ಗ್ರಾ,ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಜ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಲಾಯಿತು. ಸರಕಾರ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿ ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು. ಪಶ್ಚಿಮ ಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಬಾರದು ಎಂದು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶಿರಾಡಿ ಆಗ್ರಹಿಸಿದರು

ಈ ಸಂಧರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ರತ್ನ, ಉಪಾಧ್ಯಕ್ಷರಾದ ದಿನಕರ್ ಕುರುಪ್, ನಿಕಟಪೂರ್ವ ಉಪಾಧ್ಯಕ್ಷರಾದ ವಿನಯಚಂದ್ರ.ಟಿ, ಮಾಜಿ ಉಪಾಧ್ಯಕ್ಷರಾದ ಪರಮೇಶ್ವರ ಪೂಜಾರಿ, ಶಿಶಿಲ ಪಂಚಾಯಿತಿ ನಿಕಟಪೂರ್ವಧ್ಯಕ್ಷರಾದ ಸಂದೀಪ್ ಅಮ್ಮುಡಂಗೆ ಮಲೆನಾಡು ಹಿತರಕ್ಷಣಾ ವೇದಿಕೆಯ ಜನ ಸಂಪರ್ಕ ಸಮಿತಿ ಸದಸ್ಯ ಕರುಣಾಕರ ಶಿಶಿಲ, ಹಾಗೂ ಸಮಿತಿ ಸದಸ್ಯರ ನವೀನ್ ರೆಖ್ಯ, ಮಹೇಶ್ ಶೆಟ್ಟಿಗಾರ್, ರಮೇಶ್ ಕುರುoಜ ಗ್ರಾಮಸ್ಥರು ಉಪಸ್ಥಿತರಿದ್ದರು. ಜಯರಾಮ್ ಶಿಬಾಜೆ ಸ್ವಾಗತಿಸಿ ವಂದಿಸಿದರು

Leave a Reply

You May Have Missed

error: Content is protected !!