ನೆಲ್ಯಾಡಿ ವಲಯ ಶೌರ್ಯ ಘಟಕದಿಂದ ಸ್ವಚ್ಛತೆ

ನೆಲ್ಯಾಡಿ ವಲಯ ಶೌರ್ಯ ಘಟಕದಿಂದ ಸ್ವಚ್ಛತೆ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯ ಶೌರ್ಯ ಘಟಕದ ಸ್ವಯಂ ಸೇವಕರಿಂದ ಪಡುಬೆಟ್ಟು ಆಮುಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವರಣದ ಸುತ್ತಮುತ್ತ ಬೆಳೆದಿದ್ದ ಹುಲ್ಲುಗಳನ್ನು ಯಂತ್ರದ ಮೂಲಕ ತೆರವುಗೊಳಿಸಿ ಸ್ವಚ್ಛತೆ ಮಾಡಿದರು.

ನೆಲ್ಯಾಡಿ ವಲಯ ಜನಜಾಗೃತಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು, ದೇವಸ್ಥಾನ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಸಂಪತ್, ರಮೇಶ್ ಬೀದಿಮನೆ, ಸುಂದರ ಆಮುಂಜ, ಶೇಖರ ಶೆಟ್ಟಿ ಪಟ್ಟೆ, ಚಂದ್ರಹಾಸ ಹಾಗೂ ಘಟಕದ ಎಲ್ಲಾ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Leave a Reply

You May Have Missed

error: Content is protected !!