ಸುಪ್ತ ಪ್ರತಿಭೆಯನ್ನು ನಾವು ತೋರಿಸಿದಾಗ ಅದು ನಮ್ಮನ್ನು ಬೆಳಗುತ್ತದೆ

ಸುಪ್ತ ಪ್ರತಿಭೆಯನ್ನು ನಾವು ತೋರಿಸಿದಾಗ ಅದು ನಮ್ಮನ್ನು ಬೆಳಗುತ್ತದೆ

ನೆಲ್ಯಾಡಿ: ವಿದ್ಯಾರ್ಥಿಗಳಲ್ಲಿ ಕ್ರೀಡಾಮನೋಭಾವದ ಭಾಗವಹಿಸುವಿಕೆ ಮುಖ್ಯ. ಶಾಲೆಯಲ್ಲಿ ಕಲಿತದ್ದು ಅವಿಸ್ಮರಣೀಯ ಕ್ಷಣವಾಗಬೇಕು. ಪ್ರತಿಯೊಬ್ಬರ ಗೆಲುವಿಗೂ ಮತ್ತೊಬ್ಬರ ಸಹಕಾರ ಅಗತ್ಯ ಎಂದು ಪುತ್ತೂರು ತಾಲೂಕು ಶಿಕ್ಷಕ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಅವರು ಹೇಳಿದರು.

ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ವಲಯ ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಕುಶಾಲಪ್ಪ ಗೌಡ.ಜಿ, ಅವರು ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ. ಅದನ್ನು ಬಚ್ಚಿಡಬಾರದು, ಅದನ್ನು ಸಮಾಜದ ಮುಂದೆ ತೋರ್ಪಡಿಸಬೇಕು. ಆಗ ಅದು ಬೆಳಗಿ ನಮ್ಮನ್ನು ಬೆಳಗುತ್ತದೆ ಎಂದು ಹೇಳಿ ಎಲ್ಲಾ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಸೋಲು ಗೆಲುವು ಜೀವನದ ಅವಿಭಾಜ್ಯ ಅಂಗ, ಭಾಗವಹಿಸಿವಿಕೆ ಮುಖ್ಯ ಎಂದು ಹೇಳಿ ಎಲ್ಲರಿಗೂ ಶುಭವನ್ನು ಕೋರಿದರು.

ವಿದ್ಯಾರ್ಥಿಗಳಿಂದ ಪಥ ಸಂಚಲನ, ಪ್ರತಿಜ್ಞಾ ವಿಧಿ ಸ್ವೀಕಾರ ನೆರವೇರಿತು. ಕ್ರೀಡಾ ಮಂತ್ರಿ ಶೋಭಿತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸೆಲ್ವಿನ್ ಹಾಗೂ ತಂಡದ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯನ್ನು ಸಂಸ್ಥೆಯ ಶಿಕ್ಷಣ ಸಂಯೋಜಕರಾದ ರೆ.ಫಾ ಜಿಜನ್ ಅಬ್ರಹಾಂ‌ ಇವರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಅಧಿಕಾರಿ ಜಾನ್.ಕೆ., ಸೈಂಟ್ ಆಂಟನೀಸ್ ಪ್ರೌಢ ಶಾಲಾ ಹಿರಿಯ ಶಿಕ್ಷಕರಾದ ಬಾಲಕೃಷ್ಣ ಗೌಡ, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲಾ ಮುಖ್ಯಗುರು ಯಶೋಧರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಜಿಮ್ಸನ್ ವರ್ಗೀಸ್ ಸ್ವಾಗತಿಸಿದರು.ರಾಜೇಶ್.ರೈ ವಂದಿಸಿದರು. ಶಿಕ್ಷಕಿ ನಯನ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!