ಕರ್ನಾಟಕ ಬಂದ್: ನಾಳೆ ಶಾಲೆಗಳಿಗೆ ರಜೆ ಇದೆಯಾ? ಶಿಕ್ಷಣ ಸಚಿವರ ಸ್ಪಷ್ಟನೆ!

ಕರ್ನಾಟಕ ಬಂದ್: ನಾಳೆ ಶಾಲೆಗಳಿಗೆ ರಜೆ ಇದೆಯಾ? ಶಿಕ್ಷಣ ಸಚಿವರ ಸ್ಪಷ್ಟನೆ!

ಬೆಂಗಳೂರು: ಕನ್ನಡಪರ ಸಂಘಟನೆಗಳು ಮಾ. 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದರಿಂದ, ಶಾಲೆಗಳು ಕಾರ್ಯನಿರ್ವಹಿಸಬಹುದೇ ಎಂಬ ಪ್ರಶ್ನೆ ಎದ್ದಿದೆ. ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿರುವ ಕಾರಣ, ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಶಾಲೆ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಮಧ್ಯಾಹ್ನ ಗೃಹ ಸಚಿವ ಹಾಗೂ ಸಾರಿಗೆ ಸಚಿವರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ಸಾರಿಗೆ ಹಾಗೂ ಭದ್ರತಾ ಕೊರತೆ ಇದ್ದರೆ ಶಾಲೆಗಳು ತೆರೆಯಲು ಅಸಾಧ್ಯ. ವಿಶೇಷವಾಗಿ, ಮೌಲ್ಯಾಂಕನ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ, ಅವುಗಳನ್ನು ಮುಂದೂಡಲು ಸರ್ಕಾರ ಸಿದ್ಧವಾಗಿದೆ. ಆದರೆ ಅಂತಿಮ ತೀರ್ಮಾನ ಗೃಹ ಮತ್ತು ಸಾರಿಗೆ ಇಲಾಖೆಯ ಸಲಹೆಯ ನಂತರವೇ ಪ್ರಕಟವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

  •  

Leave a Reply

You May Have Missed

error: Content is protected !!