ಕೋಮುದ್ವೇಷ ಭಾಷಣ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಶಾಸಕ ಹರೀಶ್ ಪೂಂಜಾ

ಕೋಮುದ್ವೇಷ ಭಾಷಣ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಬೆಳ್ತಂಗಡಿ: ಮುಸ್ಲಿಂ ಧರ್ಮವನ್ನು ಅವಹೇಳನಗೊಳಿಸುವ ಮತ್ತು ಕೋಮು ಪ್ರಚೋದನೆ ಉಂಟುಮಾಡುವ ಭಾಷಣ ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ನಡೆದ ಭಾಷಣದ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಇಬ್ರಾಹಿಂ ಎಸ್.ಬಿ ದೂರು ದಾಖಲಿಸಿದ್ದು, ಶಾಸಕರು ಧರ್ಮದ ಹೆಸರು ಹೇಳಿ ಸಮುದಾಯಗಳ ನಡುವೆ ದ್ವೇಷ ಹರಡಲು ಯತ್ನಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಬಿಎನ್‌ಎಸ್ ಕಾಯ್ದೆಯ 196 ಮತ್ತು ಬಿಎನ್‌ಎಸ್ 352(2) ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

  •  
Previous post

ಅಕ್ರಮ ಜಾನುವಾರು ಸಾಗಾಟ: ಉಪ್ಪಿನಂಗಡಿಯಲ್ಲಿ ವಾಹನ ಚಾಲಕ, 4 ಜಾನುವಾರು ವಶಕ್ಕೆ

Next post

ನೆಲ್ಯಾಡಿಯಲ್ಲಿ ಮಾತೆ ಮರಿಯಾ ನೂತನ ಸ್ವರೂಪ ಪ್ರತಿಷ್ಠೆ: ಆರು ಧರ್ಮಗುರುಗಳ ಆಶೀರ್ವಾದದಲ್ಲಿ ಭಕ್ತರ ಪ್ರಾರ್ಥನೆಗೆ ವಿಶಿಷ್ಟ ಪ್ರತಿಮೆ ಪ್ರತಿಷ್ಠಾಪನೆ

Leave a Reply

You May Have Missed

error: Content is protected !!