ನೆಲ್ಯಾಡಿ: ಕಾರ್ಗಿಲ್ ವಿಜಯೋತ್ಸವದ ದಿನಾಚರಣೆಯ ಪ್ರಯುಕ್ತ ನಿವೃತ್ತ ಸೈನಿಕ ಇ.ಜಿ. ಪೌಲೋಸ್ ಗೆ ಸನ್ಮಾನ

ನೆಲ್ಯಾಡಿ: ಕಾರ್ಗಿಲ್ ವಿಜಯೋತ್ಸವದ ದಿನಾಚರಣೆಯ ಪ್ರಯುಕ್ತ ನಿವೃತ್ತ ಸೈನಿಕ ಇ.ಜಿ. ಪೌಲೋಸ್ ಗೆ ಸನ್ಮಾನ

ನೇಸರ ಜು.27: ಕಾರ್ಗಿಲ್ ವಿಜಯೋತ್ಸವದ ದಿನಾಚರಣೆಯ ಪ್ರಯುಕ್ತ. ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಭಾರತೀಯ ಭೂಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇ. ಜಿ. ಪೌಲೋಸ್ ರವರನ್ನು ಅವರ ಮನೆಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ಅವರಲ್ಲಿ ಚರ್ಚಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ. ಸೈನ್ಯಕ್ಕೆ ಸೇರುವುದರಿಂದ ದೊರಕುವ ಸೌಲಭ್ಯಗಳ ಬಗ್ಗೆ ಅವರು ವಿವರಿಸಿದರು.

ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕರಾಗಿರುವ ಅಬ್ರಹಾಂ ವರ್ಗೀಸ್, ಪ್ರಾಂಶುಪಾಲರಾಗಿರುವ ಏಲಿಯಾಸ್.ಎಂ.ಕೆ. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ ಕೆ. ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಲಿಖಿತ್, ಘಟಕ ನಾಯಕಿ ಶ್ರೇಯಾ ನಾಲ್ಕು ತಂಡಗಳ ನಾಯಕರು ಮತ್ತು ಎಸ್ ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

You May Have Missed

error: Content is protected !!