ಅನಾರೋಗ್ಯದಿಂದ ಶಿರಾಡಿ ಗ್ರಾ.ಪಂ.ಸಿಬ್ಬಂದಿ ತೇಜಸ್ ನಿಧನ

ಅನಾರೋಗ್ಯದಿಂದ ಶಿರಾಡಿ ಗ್ರಾ.ಪಂ.ಸಿಬ್ಬಂದಿ ತೇಜಸ್ ನಿಧನ

ನೇಸರ ಸೆ.04: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಶಿರಾಡಿ ಗ್ರಾಮ ಪಂಚಾಯತ್ ನ ಸಿಬ್ಬಂದಿ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ತೋಮಸ್ ವಿ.ಎಂ ಹಾಗೂ ಫಿಲೋಮಿನಾ ದಂಪತಿಗಳ ಪುತ್ರ ತೇಜಸ್ (32.ವ) ರವರು ಸೆ.3 ರ ರಾತ್ರಿ 9.00ರ ವೇಳೆಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ತೇಜಸ್ ಕಳೆದ ಕೆಲವು ತಿಂಗಳುಗಳಿಂದ ಶಿರಾಡಿ ಗ್ರಾಮ ಪಂಚಾಯಿತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಕೆಲ ಸಮಯಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ತಂದೆ, ತಾಯಿ ಸಹೋದರನನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!