ಕಂದಾಯ ಸಚಿವ ಆರ್‌.ಅಶೋಕ್‌ ಗೆ ತೀವ್ರ ಮುಖಭಂಗ.!! ರಾಜ್ಯದಲ್ಲೇ ದಾಖಲೆ ಗೆಲುವು ಸಾಧಿಸಿದ ಡಿ ಕೆ ಶಿವಕುಮಾರ್‌

ಕಂದಾಯ ಸಚಿವ ಆರ್‌.ಅಶೋಕ್‌ ಗೆ ತೀವ್ರ ಮುಖಭಂಗ.!! ರಾಜ್ಯದಲ್ಲೇ ದಾಖಲೆ ಗೆಲುವು ಸಾಧಿಸಿದ ಡಿ ಕೆ ಶಿವಕುಮಾರ್‌

ಆರ್‌. ಅಶೋಕ್‌ ಸ್ಪರ್ಧೆಯಿಂದಾಗಿ ಕನಕಪುರ ಕ್ಷೇತ್ರ ಈ ಬಾರಿ ಕುತೂಹಲದ ಕಣ್ಣುಗಳಿಗೆ ಆಹಾರವಾಗಿತ್ತು. ಆದರೆ ಕಂದಾಯ ಸಚಿವರ ಸ್ಪರ್ಧೆಯ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಮ್ಮ ಭದ್ರಕೋಟೆಯಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ಆರ್‌ ಅಶೋಕ್‌ ಮೂರನೇ ಸ್ಥಾನ ಪಡೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಕನಕಪುರದಲ್ಲಿ ಡಿಕೆ ಶಿವಕುಮಾರ್ ಬರೋಬ್ಬರಿ 1,22,392 ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದ್ದು, ರಾಜ್ಯದಲ್ಲೇ ದಾಖಲೆ ಗೆಲುವು ಸಾಧಿಸಿದ್ದಾರೆ.
ಅಂಚೆ ಮತಗಳು ಸೇರಿ ಡಿಕೆ ಶಿವಕುಮಾರ್‌ 1,43,023 ಮತಗಳನ್ನು ಪಡೆದುಕೊಂಡಿದ್ದು, ಇನ್ನುಳಿದ ಎಲ್ಲ ಅಭ್ಯರ್ಥಿಗಳು ಇಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ನಾಗರಾಜು 20,631 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡರೆ, ಬಿಜೆಪಿಯ ಆರ್. ಅಶೋಕ್ ಕೇವಲ 19,753 ಮತಗಳನ್ನಷ್ಟೆ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾರೆ.

Leave a Reply

You May Have Missed

error: Content is protected !!