ಚಾರ್ಮಾಡಿ, ಕಡಿರುದ್ಯಾವರ ಪರಿಸರದಲ್ಲಿ ಕಾಡಾನೆ ಕೃಷಿತೋಟಗಳಿಗೆ ದಾಳಿ

ಚಾರ್ಮಾಡಿ, ಕಡಿರುದ್ಯಾವರ ಪರಿಸರದಲ್ಲಿ ಕಾಡಾನೆ ಕೃಷಿತೋಟಗಳಿಗೆ ದಾಳಿ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಕೃಷಿತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಘಟನೆ ನಡೆದಿದೆ.

ಕಾಡಾನೆಗಳು ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿಯ ಮೂಲಕ ಆಗಮಿಸಿದ ಆನೆಗಳು ಹೊಸಮಠ ಪರಿಸರದ ಚಂದ್ರನ್‌ ಅವರ ತೋಟದಲ್ಲಿ 114 ಅಡಿಕೆ ಮರಗಳು, ಸಿಂಧೂ ರವಿ ಅವರ ತೋಟದ 36 ಅಡಿಕೆ ಮರಗಳು ಹಾಗೂ ಪುರುಷೋತ್ತಮ ಅವರ ತೋಟದ 33 ಅಡಿಕೆ ಮರಗಳನ್ನು ಮುರಿದು ಹಾಕಿವೆ.

ಈ ಬಗ್ಗೆ ಅರಣ್ಯ ಇಲಾಖೆ ಸಿಬಂದಿ ಪರಿಶೀಲನೆ ನಡೆಸಿ ಪರಿಹಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದೆ.

Leave a Reply

You May Have Missed

error: Content is protected !!