ನೆಲ್ಯಾಡಿ: ‘ಲಂಚ್ಹೋಮ್ ಭಟ್ರು’ನಿಧನ

ನೆಲ್ಯಾಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ ಗಣಪತಿ ಭಟ್(೭೭ವ.)ರವರು ಅಲ್ಪಕಾಲದ ಅಸೌಖ್ಯದಿಂದ ಆ.೯ರಂದು ಸ್ವಗೃಹದಲ್ಲಿ ನಿಧನರಾದರು.
ಗಣಪತಿ ಭಟ್ ಅವರು ಸುಮಾರು ೩೦ ವರ್ಷದ ಹಿಂದೆ ನೆಲ್ಯಾಡಿಯಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು ‘ಲಂಚ್ ಹೋಮ್ ಭಟ್ರು’ ಎಂದೇ ಖ್ಯಾತಿ ಪಡೆದುಕೊಂಡಿದ್ದರು. ಹೋಟೆಲ್ ಉದ್ಯಮ ಬಿಟ್ಟ ಬಳಿಕ ದಾಸ್ತಾವೇಜು ಬರಹಗಾರರಾಗಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.


















Leave a Reply