ಗಾಂಜಾ ಮಾರಾಟ ಯತ್ನ: ಮೂವರು ವಶಕ್ಕೆ

ಗಾಂಜಾ ಮಾರಾಟ ಯತ್ನ: ಮೂವರು ವಶಕ್ಕೆ

ಬೆಳುವಾಯಿಯ ಕಾಂತಾವರ ದ್ವಾರದ ಬಳಿ ಸ್ಕೂಟರ್‌ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ಸಂದೇಶ್‌ ಪಿ.ಜಿ. ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದುಕೊಂಡಿದೆ.

ಬೆಳುವಾಯಿ ನಿವಾಸಿಗಳಾದ ಮಹಮ್ಮದ್‌ ಅಯಾನ್‌ (22), ಫರ್ಹಾನ್‌ ಖಾನ್‌ (18) ಹಾಗೂ ಶೇಖ್‌ ಮುಹಮ್ಮದ್‌ ಜುಬೈರ್‌ (19) ಬಂಧಿತರು.

ಗಾಂಜಾ ಮಾರಾಟ ಯತ್ನದ ಕುರಿತಾಗಿ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದು ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 62,000 ರೂ. ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್‌, ದಿನೇಶ್‌ ಕುಮಾರ್‌, ಮಂಗಳೂರು ಉಪ ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ ಅವರ ನಿರ್ದೇಶನದಲ್ಲಿ ಈ ಕಾರ್ಯಚರಣೆ ನಡೆದಿದೆ.

ಪೊಲೀಸ್‌ ಉಪನಿರೀಕ್ಷಕರಾದ ದಿವಾಕರ ರೈ, ಸಿದ್ದಪ್ಪ ನರನೂರ ಮತ್ತು ಸಿಬಂದಿಗಳಾದ ಪ್ರಶಾಂತ್‌, ಮಹಮ್ಮದ್‌ ಇಕ್ಬಾಲ್‌, ಮಹಮ್ಮದ್‌ ಹುಸೇನ್‌, ಅಕೀಲ್‌ ಮಹಮ್ಮದ್‌, ವೆಂಕಟೇಶ್‌ ಮತ್ತು ಇತರ ಸಿಬಂದಿ ಪಾಲ್ಗೊಂಡಿದ್ದರು.

Leave a Reply

You May Have Missed

error: Content is protected !!