ನೆಟ್ಟಣ :ಗೋಪಿನಾಥನ್ ನಾಯರ್ ನಿಧನ

ನೆಟ್ಟಣ :ಗೋಪಿನಾಥನ್ ನಾಯರ್ ನಿಧನ

ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಸಾಯಂಕಾಲ ನಿಧನ ಹೊಂದಿದ್ದಾರೆ.

ಗೋಪಿನಾಥನ್ ನಾಯರ್(ವ.71) ಅವರು ಭಾರತೀಯ ರೈಲ್ವೆ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಹಲವು ಸಾಮಾಜಿಕ ಸೇವೆಯಲ್ಲಿ ಸುದೀರ್ಘವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ,ಇಬ್ಬರು ಪುತ್ರಿಯರು ,ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2 ಕ್ಕೆ ನೆಟ್ಟಣದ ಸ್ವಗೃಹದಲ್ಲಿ ನೆರವೇರಲಿದೆ.

Leave a Reply

You May Have Missed

error: Content is protected !!