ಕಡಬ ಸ.ಮಾ.ಹಿ.ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಕಡಬ ಸ.ಮಾ.ಹಿ.ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಕಡಬ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿನೋದ್ ಕುಮಾರ್ ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಶಾಂತಪ್ಪ ಗೌಡ ಪಿಜಕ್ಕಳ, ಶ್ರೀಮತಿ ವಿಮಲಾ ಜೈನ್, ಜಿನಪ್ರಕಾಶ್ ಆರಿಗ ಕುಳವಳಿಕೆ, ಅರುಣ್ ಕುಮಾರ್ ಜಡೆಮನೆ, ಜನಾರ್ಧನ ಗೌಡ ನಿವೃತ್ತ ಮುಖ್ಯಗುರು ಪಣೆಮಜಲು, ಕಿಟ್ಟಣ್ಣ ರೈ ಶಿಕ್ಷಕರು, ಮಹಮ್ಮದ್ ಕುಂಞ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ ಗೌಡ, ಗಣೇಶ ನಿವೃತ್ತ ದೈಹಿಕ ಶಿಕ್ಷಕರು ಪಣೆಮಜಲು, ತೀರ್ಥೇಶ್ ನಿವೃತ್ತ ಶಿಕ್ಷಕರು, ದಿನೇಶ್ ಆಚಾರ್ಯ, ಫೈಝಲ್ ಕೋಡಿಂಬಾಳ, ಅನಂತ ಬೈಪಡಿತ್ತಾಯ, ಶ್ರೀಮತಿ ಶಾಲಿನಿ ಸತೀಶ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ರುಕ್ಮಿಣಿ ನಿವೃತ್ತ ಪದವೀಧರ ಶಿಕ್ಷಕರು, ಶಿವಪ್ರಸಾದ್ ಮೈಲೇರಿ, ಶ್ರೀಮತಿ ಕುಸುಮಾವತಿ ಎಸ್ ಡಿ ಎಂ ಸಿ ಉಪಾಧ್ಯಕ್ಷರು ಹಾಗೂ ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕರು, ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಆನಂದ ಅಜಿಲ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶೋಭಾ ಬಿ ವಂದಿಸಿದರು. ಶಿಕ್ಷಕಿ ತೀರ್ಥಾವತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!