ಲಕ್ಷ ಕಂಠಗಳ ಸಮೂಹ ಗಾಯನ: ಸರಕಾರಿ ಪದವಿಪೂರ್ವಕಾಲೇಜು ಕಡಬ

ಲಕ್ಷ ಕಂಠಗಳ ಸಮೂಹ ಗಾಯನ: ಸರಕಾರಿ ಪದವಿಪೂರ್ವಕಾಲೇಜು ಕಡಬ

ನೇಸರ 29: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಅಯೋಜಿಸಿದ ಲಕ್ಷ ಕಂಠಗಳ ಸಮೂಹ ಗಾಯನ ಕಾರ್ಯಕ್ರಮ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ರಾಪ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಗೀತೆಗಳನ್ನು ಹಾಡಲಾಯಿತು, ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎನ್ ಕಾರ್ಯಕ್ರಮದ ಪ್ರಾಮುಖ್ಯತೆ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದರು. ಉಪನ್ಯಾಸಕ ಗಿರೀಶ್.ಕೆ ಸ್ವಾಗತಿಸಿ, ಲಾವಣ್ಯ.ಕೆ ವಂದಿಸಿದರು.

Leave a Reply

You May Have Missed

error: Content is protected !!