ಪಿಕ್ ಅಪ್ ವಾಹನದಿಂದ ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿದ್ದವರಿಗೆ ದಂಡ ವಿಧಿಸಿದ ನವೀನ್ ಭಂಡಾರಿ

ಪಿಕ್ ಅಪ್ ವಾಹನದಿಂದ ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿದ್ದವರಿಗೆ ದಂಡ ವಿಧಿಸಿದ ನವೀನ್ ಭಂಡಾರಿ

ಕಬಕ ಗ್ರಾ.ಪಂ.ವ್ಯಾಪ್ತಿಯ ಕೂವೆತ್ತಿಲ ಎಂಬಲ್ಲಿ ಪಿಕ್ ಅಪ್ ವಾಹನದಿಂದ ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿರುವ ಸಂದರ್ಭ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಕಸ ಎಸೆದವರಿಗೆ ಕಬಕ ಗ್ರಾಮ ಪಂಚಾಯತ್ ಮೂಲಕ 3 ಸಾವಿರ ರೂ. ದಂಡ ವಿಧಿಸಿದ ಘಟನೆ ಆ.28 ರಂದು ಸಂಜೆ ನಡೆದಿದೆ.

ಬೆಂಗಳೂರು ಮೂಲದ 3 ಜನರ ಕಾರ್ಮಿಕರು ಎಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳ ಪ್ಲಾಸ್ಟಿಕ್ ಕಸ ಇತ್ಯಾದಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ ಕಾರ್ಯನಿರ್ವಾಹಕ ಅಧಿಕಾರಿ ಕಬಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಅವರ ಮೂಲಕ 3 ಸಾವಿರ ರೂ. ದಂಡ ಹಾಗೂ ಎಸೆದ ಕಸವನ್ನು ಹೆಕ್ಕಿಸುವ ಕಾರ್ಯ ಮಾಡಿದ್ದಾರೆ.

ಈ ಸಂದರ್ಭ ಕಬಕ ಗ್ರಾ.ಪಂ.ಸದಸ್ಯ, ತಾ.ಪಂ.ವಿಷಯ ನಿರ್ವಾಹಕ ಸುರೇಶ್, ಎನ್ ಆರ್ ಎಲ್ ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಕಬಕ ಗ್ರಾ.ಪಂ ಲೆಕ್ಕ ಸಹಾಯಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!