ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿಶ್ವ ಹೃದಯ ದಿನಾಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿಶ್ವ ಹೃದಯ ದಿನಾಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕವು ಸೆ.28ರಂದು ‘ವಿಶ್ವ ಹೃದಯ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿನೇಶ್.ಪಿ.ಟಿ ವಹಿಸಿದರು, ಮುಖ್ಯ ಅತಿಥಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ ತ್ರಿಮೂರ್ತಿ ಅವರು ವಿದ್ಯಾರ್ಥಿಗಳಿಗೆ ನಮ್ಮ ಹೃದಯ ಸರಿಯಾಗಿ ಕಾರ್ಯ ಪ್ರವೃತಿಯಾಗಬೇಕಾದರೆ ವ್ಯಾಯಾಮ, ಪೌಷ್ಟಿಕ ಆಹಾರಗಳ ಸೇವನೆ ಹಾಗೂ ಒಳ್ಳೆಯ ಚಿಂತನೆ ಈ ಮೂರು ಅಂಶಗಳು ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐ ಕ್ಯೂಎ ಸಿ ಸಂಯೋಜಕಿ ಲತಾ.ಬಿ.ಟಿ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ಸೃಜನ್ ಮುಂಡೋಡಿ, ವನಿತಾ.ಕೆ.ಎನ್ ಹಾಗು ಘಟಕದ ನಾಯಕ ವಿಲಾಸ್.ಎನ್.ಕೆ ಉಪಸ್ಥಿತರಿದ್ದರು. ಸಂಜನಾ ನಿರೂಪಿಸಿದರು ಅಶ್ವಿತಾ ಸ್ವಾಗತಿಸಿದರು ಘಟಕದ ನಾಯಕ ವಿಲಾಸ್.ಎನ್.ಕೆ ವಂದಿಸಿದರು.

Leave a Reply

You May Have Missed

error: Content is protected !!