ದ್ವಿಚಕ್ರಗಳ ನಡುವೆ ಅಪಘಾತ; ತೀವ್ರ ಗಾಯಗೊಂಡ ದ್ವಿಚಕ್ರ ಸವಾರ

ದ್ವಿಚಕ್ರಗಳ ನಡುವೆ ಅಪಘಾತ; ತೀವ್ರ ಗಾಯಗೊಂಡ ದ್ವಿಚಕ್ರ ಸವಾರ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಗೋಳಿತಟ್ಟು ಎಂಬಲ್ಲಿ ಸೋಮವಾರ ಸಂಜೆ ಎರಡು ದ್ವಿಚಕ್ರಗಳ ಮಧ್ಯ ಅಪಘಾತ ಸಂಭವಿಸಿ ಗಾಯಗೊಂಡ ಘಟನೆ ನಡೆದಿದೆ.

ಅಂಬ್ರಾಜೆ ನಿವಾಸಿ ಚಂದ್ರಶೇಖರ ಹಾಗೂ ಅವರ ಮಗ ತೇಜಸ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಪಟೇರಿ ನಿವಾಸಿ ಪ್ರಕಾಶ್.ಕೆ.ಎನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಪ್ರಕಾಶ್.ಕೆ.ಎನ್ ಅವರ ಕಾಲು ಮುರಿತಕೊಳಗಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಚಂದ್ರಶೇಖರ ಹಾಗೂ ಅವರ ಮಗ ತೇಜಸ್ ಸಣ್ಣ ಪುಟ್ಟ ಗಾಯಗೊಂಡಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

You May Have Missed

error: Content is protected !!