ನೆಲ್ಯಾಡಿ: ಸ್ವ-ಉದ್ಯೋಗ ಮಾಹಿತಿ, ಲಾಭಾಂಶ ವಿತರಣೆ

ನೆಲ್ಯಾಡಿ: ಸ್ವ-ಉದ್ಯೋಗ ಮಾಹಿತಿ, ಲಾಭಾಂಶ ವಿತರಣೆ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯ ಕೌಕ್ರಾಡಿ ಕಾರ್ಯಕ್ಷೇತ್ರದ ವತಿಯಿಂದ ದೋoತಿಲ ಸುಜಾತಾ ಅವರ ಮನೆಯಲ್ಲಿ ಸ್ವ ಉದ್ಯೋಗ ಮಾಹಿತಿ ಹಾಗೆಯೇ ಲಾಭಾoಶ ವಿತರಣಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಕೌಕ್ರಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಒಕ್ಕೂಟ ಸಮಿತಿಯ ಮಾಜಿ ಅಧ್ಯಕ್ಷರು, ಪ್ರಗತಿಪರ ಕೃಷಿಕರು ಆಗಿರುವ ಬಾಲಕೃಷ್ಣ ಹಾರ್ಪಳ ಅವರು ಸ್ವ ಉದ್ಯೋಗ ಮಾಹಿತಿಯನ್ನು ನೀಡಿದರು.

ಕಡಬ ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ಇವರು ಪ್ರಾಸ್ತಾವಿಕ ಮಾತನಾಡಿದರು. ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ ಅವರು ತಂಡದ ಸದಸ್ಯರಿಗೆ ಲಾಭಾoಶ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿ ಹೇಮಾ.ವಿ, ಹಾಗೆಯೇ ಸದಸ್ಯರು ಭಾಗವಹಿಸಿದ್ದರು.

ಸೇವಾಪ್ರತಿನಿಧಿ ನಮಿತಾ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಸುಮನಾ.ಎಸ್ ವಂದಿಸಿದರು.

Leave a Reply

You May Have Missed

error: Content is protected !!