ಬೆಳ್ತಂಗಡಿ : ಕೆ.ಎಸ್.ಎಂ.ಸಿ.ಎ(ರಿ) ವತಿಯಿಂದ ಕ್ರಿಸ್ಮಸ್ ಕಪ್ ಕ್ರೀಡಾ ಕೂಟ


ಬೆಳ್ತಂಗಡಿ :ತೋಟತಾಡಿ ಸೈoಟ್ ಸಾವಿಯೋ ಸ್ಕೂಲ್ ಮೈದಾನದಲ್ಲಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ (ರಿ) ಇದರ ವತಿಯಿಂದ ಡಿ 28 ರಂದು “ಕ್ರಿಸ್ಮಸ್ ಕಪ್- 24” ವಾಲಿಬಾಲ್ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ನಡಸಲಾಯಿತ್ತು.
ಕ್ರಿಸ್ಮಸ್ ಕಪ್ 24, ವಾಲಿಬಾಲ್ ಪಂದ್ಯಾಟವನ್ನು ಸೈoಟ್ ಸಾವಿಯೋ ಸ್ಕೂಲ್ ಮುಖ್ಯಶಿಕ್ಷಕಿ ಸಿಸ್ಟೆರ್ ಮರಿಯಾ ಎಫ್.ಸಿ.ಸಿ ಉದ್ಘಾಟನೆ ಮಾಡಿದರು. ವಿಜೇತರಿಗೆ ಬಹುಮಾನ ವಿತರಣೆಯನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಲೋರೆನ್ಸ್ ಮುಕ್ಕುಯಿ ಅವರು ನೆರವೇರಿಸಿದರು. ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಫಾ ಆದರ್ಶ್ ಜೋಸೆಫ್, ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಪಂದ್ಯಾಟದ ಸಂಯೋಜಕರು ಜಾರ್ಜ್ ಟಿ.ವಿ. ಕೇಂದ್ರೀಯ ಸಮ್ಮಿತಿ ಸದಸ್ಯರು, ಸಂಘಟನೆಯ ವಲಯ ಅಧ್ಯಕ್ಷರುಗಳು, ಪ್ರಾಥಮಿಕ ಘಟಕದ ಅಧ್ಯಕ್ಷರುಗಳು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.





















Leave a Reply