ಕೊಕ್ಕಡ: ಅಮಲು ಪದಾರ್ಥ ಸೇವನೆಯಿಂದ ಯುವಕನ ದುರ್ಮರಣ

ಕೊಕ್ಕಡ: ಅಮಲು ಪದಾರ್ಥ ಸೇವನೆಯಿಂದ ಯುವಕನ ದುರ್ಮರಣ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅರಂಬಿಯಲ್ಲಿ ಅಮಲು ಪದಾರ್ಥ ಸೇವನೆಯಿಂದ ಯುವಕನೊಬ್ಬ ಮೃತಪಟ್ಟಿದ್ದಾರೆ.

ಮೃತರನ್ನು ರವಿ.ಎ (32) ಎಂದು ಗುರುತಿಸಲಾಗಿದೆ.

ರವಿ ಕಳೆದ ಹಲವು ವರ್ಷಗಳಿಂದ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಕಳೆದ 6-7 ವರ್ಷಗಳಿಂದ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದನು. ಮೊದಲು ಟ್ಯಾಂಕರ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು , ಬಳಿಕ ಸೌತಡ್ಕ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಇದ್ದರು.

ಮಾ.18ರಂದು ರವಿ.ಎ ವಿಷಪದಾರ್ಥ ಸೇವಿಸಿದ್ದ ಅನುಮಾನದಲ್ಲಿ ತಕ್ಷಣವೇ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಕೆ.ಎಂ.ಸಿ ಹಾಗೂ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದಾಗ್ಯೂ, ಚಿಕಿತ್ಸೆಗೆ ಸ್ಪಂದಿಸದೇ, ಮಾ.25 ರಂದು ಬೆಳಗ್ಗೆ ನಿಧನರಾದರು.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  •  

Leave a Reply

You May Have Missed

error: Content is protected !!