ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಬಯಲು: ಲಾರಿ, ಮರದ ದಿಮ್ಮಿಗಳು ಹಾಗೂ ಆರೋಪಿ ವಶಕ್ಕೆ

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಬಯಲು: ಲಾರಿ, ಮರದ ದಿಮ್ಮಿಗಳು ಹಾಗೂ ಆರೋಪಿ ವಶಕ್ಕೆ

ಉಪ್ಪಿನಂಗಡಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಭಾನುವಾರದ ರಾತ್ರಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಸುಬ್ರಹ್ಮಣ್ಯ ಕ್ರಾಸ್ ಬಳಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಯಿತು. ಆರೋಪಿಯನ್ನು ಪಾಣೆಮಂಗಳೂರಿನ ಮೊಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ.

ಲಾರಿ ಹಾಗೂ ದುಗ್ಗಲ ಧೂಪ, ರಾಂಪತ್ರೆ, ಉಪ್ಪಳಿಕೆ ಸೇರಿದಂತೆ ಹಲವು ಕಾಡು ಜಾತಿಯ ಮರದ ದಿಮ್ಮಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಪರೀಕ್ಷಾರ್ಥಿ ಹಸ್ತ ಶೆಟ್ಟಿ, ವಲಯಾರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಉಪ ವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿಸೋಜಾ, ಅರಣ್ಯ ವೀಕ್ಷಕ ಕಿರಣ್ ಹಾಗೂ ಚಾಲಕ ರವಿ ಕಾರ್ಯಾಚರಣೆ ನಡೆಸಿದರು.

cricket
  •  

Leave a Reply

You May Have Missed

error: Content is protected !!