ನೆಲ್ಯಾಡಿ: ನಿವೃತ್ತ ಗ್ಯಾಂಗ್ಮೆನ್ ಜಿನ್ನಪ್ಪ ಶೆಟ್ಟಿ ಪರಾರಿ ನಿಧನ


ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪರಾರಿ ನಿವಾಸಿ, ನಿವೃತ್ತ ಗ್ಯಾಂಗ್ಮೆನ್ ಜಿನ್ನಪ್ಪ ಶೆಟ್ಟಿ (85ವ.)ರವರು ಅನಾರೋಗ್ಯದಿಂದ ಎ.18ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಜಿನ್ನಪ್ಪ ಶೆಟ್ಟಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ವರ್ಷ ಗ್ಯಾಂಗ್ಮೆನ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿದ್ದರು.
ನಿವೃತ್ತಿ ಬಳಿಕ ಅವರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಇತ್ತೀಚಿನ ಕೆಲ ಸಮಯಗಳಿಂದ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿಯಾಗಿರುವ ಶೇಷಮ್ಮ, ಪುತ್ರರಾದ ಸತೀಶ, ಗಣೇಶ, ಜಗದೀಶ್, ಹರೀಶ, ಪುತ್ರಿ ಗೀತಾ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

























Leave a Reply