ಗೋಳಿತೊಟ್ಟು ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ


ನೆಲ್ಯಾಡಿ: ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದು. ಆದರೆ ಮಾತಿನಿಂದ ಮಾತ್ರ ಪರಿಸರ ಕಾಪಾಡಲಾರದು. ಮಕ್ಕಳಿಗೆ ಸಹಜವಾಗಿ ಪರಿಸರದ ಪ್ರೀತಿಯು ಬೆಳೆದರೆ ಮಾತ್ರ ನವೀಕರಿತ ಭೂಮಿಯನ್ನು ನಾವು ಬಡಿಸಬಲ್ಲೆವು. ಇದೇ ನಂಬಿಕೆಯೊಂದಿಗೆ ಗೋಳಿತೊಟ್ಟು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕೆ ಎನ್ ಆರ್ ಸಂಸ್ಥೆಯ ಅಧಿಕಾರಿಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
“ಇಂದಿನ ಮಕ್ಕಳಿಗೆ ಪರಿಸರ ಪ್ರೀತಿ ಬಿತ್ತಿದರೆ, ನಾಳೆಯ ಭೂಮಿ ಹೊಸ ಆಶೆಯಲಿ ಹಸಿರಾಗುವುದು ಖಚಿತ,” ಎಂಬ ಮಾತಿನಂತೆ ಮಕ್ಕಳ ಮನಸ್ಸಿನಲ್ಲಿ ಪರಿಸರ ಜಾಗೃತಿ ಮೂಡಿಸಿ, ನಾಡಿನ ಹಸಿರು ಹರಡಿಸುವ ಕೆಲಸ ನಮ್ಮೆಲ್ಲರ ಕರ್ತವ್ಯ,” ಎಂದು ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಬಿ.ಎಂ. ಅವರು ಸಭೆಯಲ್ಲಿ ಉಲ್ಲೇಖಿಸಿದರು.
ಕೆ ಎನ್ ಆರ್ ಸಂಸ್ಥೆಯ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳಿಗೆ ಪರಿಸರದ ಮಹತ್ವ, ಮಣ್ಣಿನ ಸಮತೋಲನ, ಹಸಿರು ವಲಯಗಳ ಅಗತ್ಯತೆ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಅಬ್ದುಲ್ ಲತೀಫ್ ಸಿ. ಅವರು “ಪರಿಸರ ದಿನವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ನಮ್ಮ ದೈನಂದಿನ ಬದುಕಿನಲ್ಲಿ ಹಸಿರು ಸಂಸ್ಕೃತಿಯ ಭಾಗವಾಗಬೇಕು” ಎಂದು ಉಜ್ಜ್ವಲವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಮಕ್ಕಳ ಮತ್ತು ಶಿಕ್ಷಕರ ಸಹಕಾರದಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಸಿಯನ್ನು ನೆಡುವ ಕಾರ್ಯಕ್ರಮ ನಡೆಯಿತು.




























Leave a Reply