ನೆಲ್ಯಾಡಿ: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಕುಂಡಡ್ಕ ಜನಾರ್ದನ ಶೆಟ್ಟಿ ನಿಧನ

ನೆಲ್ಯಾಡಿ: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಕುಂಡಡ್ಕ ಜನಾರ್ದನ ಶೆಟ್ಟಿ ನಿಧನ

ನೆಲ್ಯಾಡಿ: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಕುಂಡಡ್ಕ ಜನಾರ್ದನ ಶೆಟ್ಟಿ ನಿಧನ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕುಂಡಡ್ಕ ದಕ್ಷ ನಿಲಯದ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಜನಾರ್ದನ ಶೆಟ್ಟಿ(88) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನರಾದರು.

ಮೃತರು ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ. ಬಳಿಕ ಬಡ್ತಿ ಪಡೆದು ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದರು. ಸರಳತೆ, ತಾಳ್ಮೆ ಮತ್ತು ಜನಪರತೆಯ ಇವರ ಸೇವೆ ಗ್ರಾಮಸ್ಥರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದ ಗುರುತು ಬಿಟ್ಟಿದೆ.

ಸೌಮ್ಯ ಸ್ವಭಾವದ ಇವರಿಗೆ ಕುಟುಂಬ ಮತ್ತು ಸಮಾಜ ಎರಡರಲ್ಲಿಯೂ ಗೌರವದ ಸ್ಥಾನವಿತ್ತು. ಮೃತರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪತ್ನಿ ಮೀನಾಕ್ಷಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

  •  

Leave a Reply

You May Have Missed

error: Content is protected !!