ಜೇಸಿಐ ಪಂಜ ಪಂಚಶ್ರೀಗೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ

ಜೇಸಿಐ ಪಂಜ ಪಂಚಶ್ರೀಗೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ

ನೇಸರ ಮೇ‌.31: ಜೇಸಿಐ ಪಂಜ ಪಂಚಶ್ರೀಗೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ದಿನಾಂಕ 29-05-2022 ರಂದು ಮಡಂತ್ಯಾರಿನಲ್ಲಿ ನಡೆದ ಭಾರತೀಯ ಜೇಸಿಸ್ ನ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ವಲಯ ಮಟ್ಟದಲ್ಲಿ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ಹಾಗೂ ಕಾರ್ಯಕ್ರಮ ವಿಭಾಗದಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಬೆಳ್ಳಿಹಬ್ಬ ವರ್ಷಾಚರಣೆಯ ಸಂಭ್ರಮದಲ್ಲಿರುವ ಘಟಕವು ವ್ಯಕ್ತಿತ್ವ ವಿಕಸನದ ತರಬೇತಿಗಳ ಜೊತೆಗೆ ಆಯೋಜಿಸಿರುವ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶೈಕ್ಷಣಿಕ ಸರಣಿ ತರಬೇತಿಗಳು, ಸಂರಕ್ಷಣಾ ಎಂಬ ಸರಕಾರಿ ಶಾಲಾ ಪೋಷಣ ಅಭಿಯಾನ, ಕ್ಷಯ ಮುಕ್ತ ಭಾರತ ಅಭಿಯಾನ, ಆರೋಗ್ಯ ಶಿಬಿರ ಮೊದಲಾದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗಾಗಿ. ಸಮ್ಮೇಳನದಲ್ಲಿ ವಲಯ 15ರ ವಲಯಧ್ಯಕ್ಷರಾದ ಜೇಸಿಐ.Sen.ರಾಯನ್ ಉದಯ ಕ್ರಾಸ್ತ ಹಾಗೂ ಪ್ರಾಂತ್ಯ ಸಿ ಯ ಉಪಾಧ್ಯಕ್ಷರಾಗಿರುವ JFD.ರವಿಚಂದ್ರ ಪಾಠಾಳಿ ರವರು ಪ್ರಶಸ್ತಿ ಯನ್ನು ಜೇಸಿಐ ಪಂಜ ಪಂಚಶ್ರೀ ಯ ಘಟಕ ಅಧ್ಯಕ್ಷರಾದ JFM.ಶಿವಪ್ರಸಾದ ಹಾಲೆಮಜಲು ರವರಿಗೆ ನೀಡಿ ಗೌರವಿಸಿದರು. ಜೊತೆಗೆ ಘಟಕದ ಕಾರ್ಯದರ್ಶಿ ಜೇಸಿ ಕೌಶಿಕ್ ಕುಳ, ಪೂರ್ವ ಅಧ್ಯಕ್ಷರು ಗಳಾದ ಜೇಸಿ.ಸವಿತಾರ ಮುಡೂರು, ಜೇಸಿ.ಶಶಿಧರ ಪಳಂಗಾಯ, ಜೇಸಿ ದಯಪ್ರಸಾದ ಚೀಮುಳ್ಳು, ಜೇಸಿ.ಸೋಮಶೇಖರ ನೇರಳ, ಜೇಸಿ.ಭರತ ನೆಕ್ರಾಜೆ, ಜೇಸಿ.ಸುದರ್ಶನ ಪಟ್ಟಾಜೆ, ಜೇಸಿ.ತೀರ್ಥಾನಂದ ಕೊಡಂಕಿರಿ, ಜೇಸಿ.ವಾಸುದೇವ ಮೇಲ್ಪಾಡಿ, ಜೇಸಿ. ಚೇತನ್ ತಂಟೆಪ್ಪಾಡಿ, ಜೇಸಿ.ನಾಗಮಣಿ ಕೆದಿಲ. ಉಪಾಧ್ಯಕ್ಷರಾದ ಜೇಸಿ.ಲೋಕೇಶ್ ಆಕ್ರಿಕಟ್ಟೆ, ಜೊತೆ ಕಾರ್ಯದರ್ಶಿ ಜೇಸಿ.ವಿಜೇಶ್ ಹಿರಿಯಡ್ಕ ಕಾರ್ಯಕ್ರಮ ನಿರ್ದೇಶಕರಾದ ಜೇಸಿ.ದುರ್ಗಾದಾಸ್ ಕಡ್ಲಾರ್ ಸದಸ್ಯರುಗಳಾದ ಕುಸುಮಾಧರ ಕಕ್ಯಾನ, ಜೇಸಿ.ಪ್ರಕಾಶ್ ಅಲ್ಪೆ, ಸುಪ್ರೀತ್ ಗುಡ್ಡೆಮನೆ, ಆದಿತ್ಯ ಚಿದ್ಗಲ್ಲು, ಅಶ್ವಥ್ ಬಾಬ್ಲುಬೆಟ್ಟು, ಜೀವನ್ ಶೆಟ್ಟಿಗದ್ದೆ ಮತ್ತು ಹರ್ಷಿತ್ ಮುಂಡೋಡಿ ರವರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!