ಉದನೆ:ಜಮೀನು ಕುರಿತ ವೈಷಮ್ಯ….!!!ನೇಲ್ಯಡ್ಕ-ದೇವಸ ದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕಡಿದು ಕೊಲೆ

ನೇಸರ ಜ13: ರೆಖ್ಯದ ನೇಲ್ಯಡ್ಕ ಸಮೀಪ ದೇವಸ ಎಂಬಲ್ಲಿ ಜಮೀನಿನ ತಕರಾರಿನ ಮೇಲೆ ವೈಯಕ್ತಿಕ ದ್ವೇಷದಿಂದ,ಕೃಷಿಕ ಹಾಗೂ ಎಲ್ಐಸಿ ಪ್ರತಿನಿಧಿಯಾಗಿದ್ದ ಶಾಂತಪ್ಪ ಗೌಡ ದೇವಸ(ವ40 )ಎಂಬವರನ್ನು, ಅದೇ ಪರಿಸರದ ಜಯಚಂದ್ರ(ವ 60)ಕಡಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ತನಿಖೆಗೆ ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ.














Leave a Reply