ನೆಲ್ಯಾಡಿ ಹೊರಠಾಣೆಯಲ್ಲಿ ಸ್ವಾತಂತ್ರ್ಯದ 79ನೇ ಹಬ್ಬ – ಧ್ವಜಾರೋಹಣದೊಂದಿಗೆ ದೇಶಭಕ್ತಿ ಜಾಗೃತಿ

Nellyadi

ನೆಲ್ಯಾಡಿ ಹೊರಠಾಣೆಯಲ್ಲಿ ಸ್ವಾತಂತ್ರ್ಯದ 79ನೇ ಹಬ್ಬ – ಧ್ವಜಾರೋಹಣದೊಂದಿಗೆ ದೇಶಭಕ್ತಿ ಜಾಗೃತಿ

ನೆಲ್ಯಾಡಿ: ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಹೊರಠಾಣೆಯಲ್ಲಿ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಭಾವೈಕ್ಯತೆಯ ಸಾನ್ನಿಧ್ಯದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಹೆಡ್ ಕಾನ್‍ಸ್ಟೇಬಲ್ ಪ್ರವೀಣ್.ಕೆ.ಎಲ್. ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸುತ್ತಾ, ಪ್ರತಿಯೊಬ್ಬರೂ ತಮ್ಮ ಕರ್ತವ್ಯದಲ್ಲಿ ನಿಷ್ಠೆಯಿಂದ, ಶಿಸ್ತು-ಸಮರ್ಪಣೆಗಳೊಂದಿಗೆ ದೇಶಾಭಿವೃದ್ಧಿಗೆ ಕೊಡುಗೆ ನೀಡಬೇಕು. ಸ್ವಾತಂತ್ರ್ಯ ಕೇವಲ ಹಬ್ಬವಲ್ಲ, ಅದು ನಮ್ಮ ಹೊಣೆಗಾರಿಕೆ. ನಾವು ಪ್ರತಿದಿನ ಮಾಡುವ ಕೆಲಸವೇ ನಿಜವಾದ ದೇಶಸೇವೆ” ಎಂದು ಪ್ರವೀಣ್ ಹೇಳಿದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್‍ಸ್ಟೇಬಲ್ ದಯಾನಂದ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗವರು ಹಾಜರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರೀಯ ಗೀತೆ ಗಾನ ಮಾಡಲಾಯಿತು.

  •  

Leave a Reply

You May Have Missed

error: Content is protected !!