ಅಂಬ್ಯುಲೆನ್ಸ್‌ಗೆ ದಾರಿ ಬಿಡದ ಸ್ಕೂಟಿ ಸವಾರ ವಶಕ್ಕೆ – ಬಿಸಿಲೆ ಘಾಟ್ ಅಪಘಾತ ಗಾಯಾಳು ಸಾಗಣೆ ವೇಳೆ ಅಡ್ಡಿಪಡಿಸಿದ ಘಟನೆ!

ಅಂಬ್ಯುಲೆನ್ಸ್‌ಗೆ ದಾರಿ ಬಿಡದ ಸ್ಕೂಟಿ ಸವಾರ ವಶಕ್ಕೆ – ಬಿಸಿಲೆ ಘಾಟ್ ಅಪಘಾತ ಗಾಯಾಳು ಸಾಗಣೆ ವೇಳೆ ಅಡ್ಡಿಪಡಿಸಿದ ಘಟನೆ!

ಬಂಟ್ವಾಳ: ಬಿಸಿಲೆ ಘಾಟ್‌ನಲ್ಲಿ ನಡೆದ ಭಾರೀ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತರಲಾಗಿದ್ದ ಸಂದರ್ಭದಲ್ಲಿ, ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಂಭೀರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿದ್ದರು.

ಅ.30 ರಂದು ಮಧ್ಯಾಹ್ನ ಸುಮಾರು 1.30 ಗಂಟೆಯ ಸುಮಾರಿಗೆ, ಪುತ್ತೂರಿನಿಂದ ಮಂಗಳೂರಿನತ್ತ ಅಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಬಳಿ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ಸೈರನ್ ಶಬ್ದ ಕೇಳಿಯೂ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಘಟನೆ ನಡೆದಿದೆ.

ಈ ಘಟನೆಯಲ್ಲಿ ಬೆಟ್ಟಂಪಾಡಿ ಗ್ರಾಮದ 38 ವರ್ಷದ ಮಹಮ್ಮದ್ ಮನ್ಸೂರು ಎಂಬುವರನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 128/2025ರಡಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 110 ಮತ್ತು 125ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

  •  
Previous post

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಸಿಂಧು ಗುಜರನ್, ಡಾ| ಪಿ ವಿ ಶೆಟ್ಟಿ, ಉಮೇಶ್ ಪಂಬದರ ಸೇರಿ 70 ಮಂದಿಗೆ ಗೌರವ – ಯಾರೆಲ್ಲಾ ಆಯ್ಕೆ?

Next post

ಪುದುವೆಟ್ಟು ನದಿಯಲ್ಲಿ ಕಾಡಾನೆ ಪ್ರತ್ಯಕ್ಷ — ಗ್ರಾಮಸ್ಥರಲ್ಲಿ ಆತಂಕ

Leave a Reply

You May Have Missed

error: Content is protected !!